Thursday, April 25, 2013

ಪುಣ್ಯಕೋಟಿ ಗೋವಿನ ಹಾಡು (Punyakoti Govina Haadu Lyrics)

ಧರಣಿ ಮಂಡಲ ಮಧ್ಯದೊಳಗೆ 
ಮೆರೆಯುತಿಹ ಕರ್ಣಾಟ ದೇಶದೊಳಿರುವ 
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು 

ಉದಯ ಕಾಲದೊಳೆದ್ದು ಗೊಲ್ಲನು 
ನದಿಯ ಸ್ನಾನವ ಮಾಡಿಕೊಂಡು 
ಮುದದಿ ತಿಲಕವ ಹಣೆಯೊಳಿಟ್ಟು
ಚತುರ ಶಿಖೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ 
ಕೊಳಲನೂದುತ ಗೊಲ್ಲ ಗೌಡನು 
ಬಳಸಿ ನಿಂದ ತುರುಗಳನ್ನು 
ಬಳಿಗೆ ಕರೆದನು ಹರುಷದಿ 

ಗಂಗೆ ಬಾರೆ ಗೌರಿ ಬಾರೆ 
ತುಂಗಭದ್ರೆ ತಾಯಿ ಬಾರೆ 
ಪುಣ್ಯಕೋಟಿ ನೀನು ಬಾರೇ 
ಎಂದು ಗೊಲ್ಲನು ಕರೆದನು 

ಗೊಲ್ಲ ಕರೆದ ಧ್ವನಿಯ ಕೇಳಿ 
ಎಲ್ಲ ಹಸುಗಳು ಬಂದು ನಿಂತು 
ಚೆಲ್ಲಿ ಸೂಸಿ ಹಾಲು ಕರೆಯಲು 
ಅಲ್ಲಿ ತುಂಬಿತು ಬಿಂದಿಗೆ 

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 

ಹಬ್ಬಿದ ಮಲೆ ಮಧ್ಯದೊಳಗೆ 
ಅರ್ಭುತಾನೆಂದೆಂಬ ವ್ಯಾಘ್ರನು 
ಅಬ್ಬರಿಸಿ ಹಸಿಹಸಿದು ಬೆಟ್ಟದ 
ಕಿಬ್ಬಿಯೊಳು ತಾನಿದ್ದನು 

ಸಿಡಿದು ರೋಷದಿ ಮೊರೆಯುತಾ ಹುಲಿ 
ಘುಡುಘುಡಿಸಿ ಭೋರಿಡುತ ಛಂಗನೆ 
ತುಡುಕಲೆರಗಿದ ರಭಸಕಂಜಿ 
ಚೆದರಿ ಹೋದವು ಹಸುಗಳು 

ಪುಣ್ಯಕೋಟಿ ಎಂಬ ಹಸುವು 
ತನ್ನ ಕಂದನ ನೆನೆದುಕೊಂಡು 
ಮುನ್ನ ಹಾಲನು ಕೊಡುವೆನೆನುತ 
ಚೆಂದದಿ ತಾ ಬರುತಿರೆ 

ಇಂದೆನಗೆ ಆಹಾರ ಸಿಕ್ಕಿತು 
ಎಂದು ಬೇಗನೆ ದುಷ್ಟ ವ್ಯಾಘ್ರನು 
ಬಂದು ಬಳಸಿ ಅಡ್ಡಗಟ್ಟಿ 
ನಿಂದನಾ ಹುಲಿರಾಯನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 

ಮೇಲೆ ಬಿದ್ದು ನಿನ್ನನೀಗಲೆ 
ಬೀಳಹೊಯ್ವೆನು ನಿನ್ನ ಹೊಟ್ಟೆಯ 
ಸೀಳಿಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು 

ಒಂದು ಬಿನ್ನಹ ಹುಲಿಯೆ ಕೇಳು 
ಕಂದನಿರುವನು ದೊಡ್ಡಿಯೊಳಗೆ 
ಒಂದು ನಿಮಿಷದಿ ಮೊಲೆಯ ಕೊಟ್ಟು 
ಬಂದು ಸೇರುವೆನಿಲ್ಲಿಗೆ 

ಹಸಿದ ವೇಳೆಗೆ ಸಿಕ್ಕಿದೊಡವೆಯ 
ವಶವ ಮಾಡದೆ ಬಿಡಲು ನೀನು 
ನುಸುಳಿ ಹೋಗುವೆ ಮತ್ತೆ ಬರುವೆಯ 
ಹುಸಿಯನಾಡುವೆ ಎಂದಿತು 

ಸತ್ಯವೇ ನಮ್ಮ ತಾಯಿ ತಂದೆ 
ಸತ್ಯವೇ ನಮ್ಮ ಬಂಧು ಬಳಗ 
ಸತ್ಯ ವಾಕ್ಯಕೆ ತಪ್ಪಿ ನಡೆದರೆ 
ಮೆಚ್ಚನಾ ಪರಮಾತ್ಮನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 

ಕೊಂದು ತಿನ್ನುವೆನೆಂಬ ಹುಲಿಗೆ 
ಚೆಂದದಿಂದ ಭಾಷೆ ಇತ್ತು 
ಕಂದ ನಿನ್ನನು ನೋಡಿ ಹೋಗುವೆ 
ನೆಂದು ಬಂದೆನು ದೊಡ್ಡಿಗೆ 

ಆರ ಮೊಲೆಯನು ಕುಡಿಯಲಮ್ಮ?
ಆರ ಸೇರಿ ಬದುಕಲಮ್ಮ? 
ಆರ ಬಳಿಯಲಿ ಮಲಗಲಮ್ಮ?
ಆರು ನನಗೆ ಹಿತವರು? 

ಅಮ್ಮಗಳಿರಾ ಅಕ್ಕಗಳಿರಾ 
ನಮ್ಮ ತಾಯೊಡಹುಟ್ಟುಗಳಿರಾ 
ನಿಮ್ಮ ಕಂದನೆಂದು ಕಾಣಿರಿ 
ತಬ್ಬಲಿಯನೀ ಕರುವನು 

ಮುಂದೆ ಬಂದರೆ ಹಾಯಬೇಡಿ 
ಹಿಂದೆ ಬಂದರೆ ಒದೆಯಬೇಡಿ 
ಕಂದ ನಿಮ್ಮವನೆಂದು ಕಾಣಿರಿ 
ತಬ್ಬಲಿಯನೀ ಕರುವನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು 
ಇಬ್ಬರ ಋಣ ತೀರಿತೆಂದು 
ತಬ್ಬಿಕೊಂಡಿತು ಕಂದನ 

ಗೋವು ಕರುವನು ಬಿಟ್ಟು ಬಂದು 
ಸಾವಕಾಶವ ಮಾಡದಂತೆ 
ಗವಿಯ ಬಾಗಿಲ ಸೇರಿ ನಿಂತು 
ತವಕದಲಿ ಹುಲಿಗೆಂದಿತು 

ಖಂಡವಿದೆಕೋ ಮಾಂಸವಿದೆಕೋ 
ಗುಂಡಿಗೆಯ ಬಿಸಿ ರಕ್ತವಿದೆಕೋ 
ಚಂಡ ವ್ಯಾಘ್ರನೆ ನೀನಿದೆಲ್ಲವ 
ನುಂಡು ಸಂತಸದಿಂದಿರು 

ಪುಣ್ಯಕೋಟಿಯ ಮಾತ ಕೇಳಿ 
ಕಣ್ಣ ನೀರನು ಸುರಿಸಿ ನೊಂದು 
ಕನ್ನೆಯಿವಳನು ಕೊಂದು ತಿಂದರೆ 
ಮೆಚ್ಚನಾ ಪರಮಾತ್ಮನು 

ಎನ್ನ ಒಡಹುಟ್ಟಕ್ಕ ನೀನು 
ನಿನ್ನ ಕೊಂದು ಏನ ಪಡೆವೆನು? 
ಎನ್ನುತ ಹುಲಿ ಹಾರಿ ನೆಗೆದು 
ತನ್ನ ಪ್ರಾಣವ ಬಿಟ್ಟಿತು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು 

ಪುಣ್ಯಕೋಟಿಯು ನಲಿದು ಕರುವಿಗೆ 
ಉಣ್ಣಿಸಿತು ಮೊಲೆಯ ಬೇಗದಿ 
ಚೆನ್ನ ಗೊಲ್ಲನ ಕರೆದು ತಾನು
ಮುನ್ನ ತಾನಿಂತೆಂದಿತು 

ಎನ್ನ ವಂಶದ ಗೋವ್ಗಳೊಳಗೆ 
ನಿನ್ನ ವಂಶದ ಗೊಲ್ಲರೊಳಗೆ 
ಮುನ್ನ ಪ್ರತಿ ಸಂಕ್ರಾಂತಿಯೊಳಗೆ 
ಚೆನ್ನ ಕೃಷ್ಣನ ಭಜಿಸಿರೈ 

ಈವನು ಸೌಭಾಗ್ಯ ಸಂಪದ 
ಭಾವಜಪಿತ ಕೃಷ್ಣನು

37 comments:

  1. My favorite childhood song my mother used to sing for me .. Just brought tears in my eyes

    ReplyDelete
  2. The lyrics is reproduced here with quite some correction:

    ಧರಣಿ ಮಂಡಲ ಮಧ್ಯದೊಳಗೆ
    ಮೆರೆಯುತಿಹ ಕರ್ಣಾಟ ದೇಶದೊಳಿರುವ
    ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

    ಎಳೆಯ ಮಾವಿನ ಮರದ ಕೆಳಗೆ
    ಕೊಳಲನೂದುತ ಗೊಲ್ಲ ಗೌಡನು
    ಬಳಸಿ ನಿಂದ ತುರುಗಳನ್ನು
    ಬಳಿಗೆ ಕರೆದನು ಹರುಷದಿ

    ಗಂಗೆ ಬಾರೆ ಗೌರಿ ಬಾರೆ
    ತುಂಗಭದ್ರೆ ತಾಯಿ ಬಾರೆ
    ಪುಣ್ಯಕೋಟಿ ನೀನು ಬಾರೇ
    ಎಂದು ಗೊಲ್ಲನು ಕರೆದನು

    ಗೊಲ್ಲ ಕರೆದ ಧ್ವನಿಯ ಕೇಳಿ
    ಎಲ್ಲ ಹಸುಗಳು ಬಂದು ನಿಂತು
    ಚೆಲ್ಲಿ ಸೂಸಿ ಹಾಲು ಕರೆಯಲು
    ಅಲ್ಲಿ ತುಂಬಿತು ಬಿಂದಿಗೆ

    ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

    ಹಬ್ಬಿದ ಮಲೆ ಮಧ್ಯದೊಳಗೆ
    ಅರ್ಭುತಾನೆಂದೆಂಬ ವ್ಯಾಘ್ರನು
    ಅಬ್ಬರಿಸಿ ಹಸಿಹಸಿದು ಬೆಟ್ಟದ
    ಕಿಬ್ಬಿಯೊಳು ತಾನಿದ್ದನು

    ಸಿಡಿದು ರೋಷದಿ ಮೊರೆಯುತಾ ಹುಲಿ
    ಘುಡುಘುಡಿಸಿ ಭೋರಿಡುತ ಛಂಗನೆ
    ತುಡುಕಲೆರಗಿದ ರಭಸಕಂಜಿ
    ಚೆದರಿ ಹೋದವು ಹಸುಗಳು

    ಪುಣ್ಯಕೋಟಿ ಎಂಬ ಹಸುವು
    ತನ್ನ ಕಂದನ ನೆನೆದುಕೊಂಡು
    ಮುನ್ನ ಹಾಲನು ಕೊಡುವೆನೆನುತ
    ಚೆಂದದಿ ತಾ ಬರುತಿರೆ

    ಇಂದೆನಗೆ ಆಹಾರ ಸಿಕ್ಕಿತು
    ಎಂದು ಬೇಗನೆ ದುಷ್ಟ ವ್ಯಾಘ್ರನು
    ಬಂದು ಬಳಸಿ ಅಡ್ಡಗಟ್ಟಿ
    ನಿಂದನಾ ಹುಲಿರಾಯನು

    ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

    ಮೇಲೆ ಬಿದ್ದು ನಿನ್ನನೀಗಲೆ
    ಬೀಳಹೊಯ್ವೆನು ನಿನ್ನ ಹೊಟ್ಟೆಯ
    ಸೀಳಿಬಿಡುವೆನು ಎನುತ ಕೋಪದಿ
    ಖೂಳ ವ್ಯಾಘ್ರನು ಕೂಗಲು

    ಒಂದು ಬಿನ್ನಹ ಹುಲಿಯೆ ಕೇಳು
    ಕಂದನಿರುವನು ದೊಡ್ಡಿಯೊಳಗೆ
    ಒಂದು ನಿಮಿಷದಿ ಮೊಲೆಯ ಕೊಟ್ಟು
    ಬಂದು ಸೇರುವೆನಿಲ್ಲಿಗೆ

    ಹಸಿದ ವೇಳೆಗೆ ಸಿಕ್ಕಿದೊಡವೆಯ
    ವಶವ ಮಾಡದೆ ಬಿಡಲು ನೀನು
    ನುಸುಳಿ ಹೋಗುವೆ ಮತ್ತೆ ಬರುವೆಯ
    ಹುಸಿಯನಾಡುವೆ ಎಂದಿತು

    ಸತ್ಯವೇ ನಮ್ಮ ತಾಯಿ ತಂದೆ
    ಸತ್ಯವೇ ನಮ್ಮ ಬಂಧು ಬಳಗ
    ಸತ್ಯ ವಾಕ್ಯಕೆ ತಪ್ಪಿ ನಡೆದರೆ
    ಮೆಚ್ಚನಾ ಪರಮಾತ್ಮನು

    ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

    ಕೊಂದು ತಿನ್ನುವೆನೆಂಬ ಹುಲಿಗೆ
    ಚೆಂದದಿಂದ ಭಾಷೆ ಇತ್ತು
    ಕಂದ ನಿನ್ನನು ನೋಡಿ ಹೋಗುವೆ
    ನೆಂದು ಬಂದೆನು ದೊಡ್ಡಿಗೆ

    ಆರ ಮೊಲೆಯನು ಕುಡಿಯಲಮ್ಮ?
    ಆರ ಸೇರಿ ಬದುಕಲಮ್ಮ?
    ಆರ ಬಳಿಯಲಿ ಮಲಗಲಮ್ಮ?
    ಆರು ನನಗೆ ಹಿತವರು?

    ಅಮ್ಮಗಳಿರಾ ಅಕ್ಕಗಳಿರಾ
    ನಮ್ಮ ತಾಯೊಡಹುಟ್ಟುಗಳಿರಾ
    ನಿಮ್ಮ ಕಂದನೆಂದು ಕಾಣಿರಿ
    ತಬ್ಬಲಿಯನೀ ಕರುವನು

    ಮುಂದೆ ಬಂದರೆ ಹಾಯಬೇಡಿ
    ಹಿಂದೆ ಬಂದರೆ ಒದೆಯಬೇಡಿ
    ಕಂದ ನಿಮ್ಮವನೆಂದು ಕಾಣಿರಿ
    ತಬ್ಬಲಿಯನೀ ಕರುವನು

    ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

    ತಬ್ಬಲಿಯು ನೀನಾದೆ ಮಗನೆ
    ಹೆಬ್ಬುಲಿಯ ಬಾಯನ್ನು ಹೊಗುವೆನು
    ಇಬ್ಬರ ಋಣ ತೀರಿತೆಂದು
    ತಬ್ಬಿಕೊಂಡಿತು ಕಂದನ

    ಗೋವು ಕರುವನು ಬಿಟ್ಟು ಬಂದು
    ಸಾವಕಾಶವ ಮಾಡದಂತೆ
    ಗವಿಯ ಬಾಗಿಲ ಸೇರಿ ನಿಂತು
    ತವಕದಲಿ ಹುಲಿಗೆಂದಿತು

    ಖಂಡವಿದೆಕೋ ಮಾಂಸವಿದೆಕೋ
    ಗುಂಡಿಗೆಯ ಬಿಸಿ ರಕ್ತವಿದೆಕೋ
    ಚಂಡ ವ್ಯಾಘ್ರನೆ ನೀನಿದೆಲ್ಲವ
    ನುಂಡು ಸಂತಸದಿಂದಿರು

    ಪುಣ್ಯಕೋಟಿಯ ಮಾತ ಕೇಳಿ
    ಕಣ್ಣ ನೀರನು ಸುರಿಸಿ ನೊಂದು
    ಕನ್ನೆಯಿವಳನು ಕೊಂದು ತಿಂದರೆ
    ಮೆಚ್ಚನಾ ಪರಮಾತ್ಮನು

    ಎನ್ನ ಒಡಹುಟ್ಟಕ್ಕ ನೀನು
    ನಿನ್ನ ಕೊಂದು ಏನ ಪಡೆವೆನು?
    ಎನ್ನುತ ಹುಲಿ ಹಾರಿ ನೆಗೆದು
    ತನ್ನ ಪ್ರಾಣವ ಬಿಟ್ಟಿತು

    ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು

    ಪುಣ್ಯಕೋಟಿಯು ನಲಿದು ಕರುವಿಗೆ
    ಉಣ್ಣಿಸಿತು ಮೊಲೆಯ ಬೇಗದಿ
    ಚೆನ್ನ ಗೊಲ್ಲನ ಕರೆದು ತಾನು
    ಮುನ್ನ ತಾನಿಂತೆಂದಿತು

    ಎನ್ನ ವಂಶದ ಗೋವ್ಗಳೊಳಗೆ
    ನಿನ್ನ ವಂಶದ ಗೊಲ್ಲರೊಳಗೆ
    ಮುನ್ನ ಪ್ರತಿ ಸಂಕ್ರಾಂತಿಯೊಳಗೆ
    ಚೆನ್ನ ಕೃಷ್ಣನ ಭಜಿಸಿರೈ

    ಈವನು ಸೌಭಾಗ್ಯ ಸಂಪದ
    ಭಾವಜಪಿತ ಕೃಷ್ಣನು

    'ಭಾವಜ' is Manmatha. 'ಭಾವಜಪಿತ' is his father, Vishnu, equivalent to Krishna.

    ReplyDelete
    Replies
    1. Thank you for corrections :) I have updated the same...

      Delete
    2. Thanks for accepting my suggestion.

      Delete
    3. Who is the poet of this song?

      Delete
    4. It is a folk song. so no one knows who wrote the lyrics

      Delete
    5. This comment has been removed by the author.

      Delete
    6. If any morality is adopted by me is because of this song I strongly believe

      And after this either sung or heard there will be few drops in my eyes which says the quality of the song which could not be by words.

      And one final thing I want to share that there is strength in truth which can change the hard thing s too

      Regards

      Delete
  3. Thanks for the lyrics. I use your link now to recite it to my daughter.

    ReplyDelete
  4. This comment has been removed by the author.

    ReplyDelete
  5. One stanza is missing here, after the first stanza, the following should come as the second stanza.

    ಉದಯ ಕಾಲದೊಳೆದ್ದು ಗೊಲ್ಲನು
    ನದಿಯ ಸ್ನಾನವ ಮಾಡಿಕೊಂಡು
    ಮುದದಿ ತಿಲಕವ ಹಣೆಯೊಳಿಟ್ಟು
    ಚತುರ ಶಿಖೆಯನು ಹಾಕಿದ

    And it continues... :)

    ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

    ReplyDelete
  6. During school I use to cry...still today also this song bring tears in my eyes.

    ReplyDelete
  7. somewhere I remember a line odane doddiya bidutha hasugalu nadedavaaga aranyake.. but not remembering the stanza. anyone can help ?

    ReplyDelete
  8. This is one of the most influential songs that i ever heard, one such song is more than Ramayana and mahabhrath for life.

    ReplyDelete
  9. There is two more stanzas missing in this. I vaguely remember the following.
    1. ಅಮ್ಮ ನೀನು ಸಾಯಲೇಕೆ ನನ್ನ ತಬ್ಬಲಿ ಮಾಡಬೇಕೆ....
    2. ಕೊಟ್ಟ ಭಾಷೆಗೆ ತಪ್ಪಲಾರೆ..... ...... ....
    ಮರಳಿ ಪೋಗುವೆ ಕಟ್ಟಕಡೆಗಿದು ಖಂಡಿತ.

    ನನಗೆ ಇದರ ಪೂರ್ಣ ಟೆಕ್ಸ್ಟ್ ಮರೆತು ಹೋಗಿದೆ. ತಿಳಿದವರು ದಯವಿಟ್ಟು ತಿಳಿಸಿ.

    ReplyDelete
    Replies
    1. 2. ಕೊಟ್ಟ ಭಾಷೆಗೆ ತಪ್ಪಲಾರೆನು
      ಕೆಟ್ಟ ಯೋಚನೆ ಮಾಡಲಾರೆನು
      ನಿಷ್ಠೆಯಿಂದಲಿ ಪೊಪೆನಲ್ಲಿಗೆ
      ಕಟ್ಟ ಕಡೆಗಿದು ಖಂಡಿತ

      Delete
    2. Exactly..I was trying to type the same thing.this is where the poem's heart lies

      Delete
    3. ಅಮ್ಮ ನೀನು ಸಾಯಲೇಕೆ, ನನ್ನ ತಬ್ಬಲಿ ಮಾಡ ಲೇಕೆ, ಸಮ್ಮನಿಲ್ಲಿಯೇ ನಿಲ್ಲೆನುತ್ತಾ ಅಮ್ಮನಿಗೆ ಕರು ಹೇಳಲು.

      ಕೊಟ್ಟ ಭಾಷೆಗೆ ತಪ್ಪಲಾರೆನು, ಕೆಟ್ಟ ಯೋಚನೆ ಮಾಡಲಾರೆನು, ನಿಷ್ಠೆಯಿಂದಲಿ ಪೋಪೆನಲ್ಲಿಗೆ, ಕಟ್ಟ ಕಡೆಯಿದು ಖಂಡಿತ.

      Delete
    4. Please Update the Full Song lyrics with these above 2 missing stanzas (ಅಮ್ಮ ನೀನು ಸಾಯಲೇಕೆ,ಕೊಟ್ಟ ಭಾಷೆಗೆ ತಪ್ಪಲಾರೆನು,) and including one more stanza ಒಡನೆ ದೊಡ್ಡಿಯ ಬಿಡುತ ಹಸುಗಳು I don't know full Stanza please search that full Stanza and Update the full Song once again with aa missing stanzas please please please boss

      Delete
  10. Why should Tiger commit suicide in this story?

    ReplyDelete
    Replies
    1. Because he feels ashamed of himself for doubting punyakoti and also feels ashamed of himself for thinking to eat such a Nobel soul as she kept her promise.

      Delete
  11. Heart touching lovely song, my late father used teach me this song when I was in school.

    ReplyDelete
  12. So so good in these song we can change our life

    ReplyDelete
  13. I am going to sing these in compitation all say all best

    ReplyDelete
  14. ಗೋವಿನ ಹಾಡು 1870 ನಲ್ಲಿ ರಚನೆ ಮಾಡಿರುವುದು. ಸುಮಾರು 60-70 ಪುಟಗಳಿವೆ.
    ಅಳಿದುಳಿದ ಒಂದು ಪ್ರತಿ ಲಂಡನ್ ಅಥವ ಅಮೆರಿಕ ದಲ್ಲಿ ದೊರಕಿದೆ... ನಮ್ಮ ದೇಶ ಭಾಷೆ ಸಂಸ್ಕೃತಿ ಶ್ರೀಮಂತಿಕೆ ಋಷಿ ಮುನಿಗಳ ಪೂರ್ಣ ವಿವರಣೆ ಇದೆ.. ಪ್ರಯತ್ನ ಪಡುತ್ತಿದ್ದೇನೆ ಅದರ copy ಗಾಗಿ.. ಖಂಡಿತ ಅದನ್ನು attach ಮಾಡ್ತೇನೆ.

    ReplyDelete
  15. Full version of this Song Aavailable on internet archive --- https://archive.org/details/CIILBVPKSPGOVINAHADU/page/n25/mode/2up
    If you have time update your version with full version

    ReplyDelete
  16. ಸತ್ಯ ವಾಕ್ಯಕ್ಕೆ ತಪ್ಪಿ ನಡೆದರೆ ಪರಮಾತ್ಮನು Missing

    ReplyDelete